ಮುದ್ದೇಬಿಹಾಳ: ಸಾಲಭಾಧೆಯಿಂದ ರೈತನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ನಡಹಳ್ಳಿ ಗ್ರಾಮದಲ್ಲಿ ಗುರುವಾರ ಸಂಭವಿಸಿದೆ.
ಶಾಂತಗೌಡ ಬಲವಂತರಾಯ ಬಿರಾದಾರ(೬೦) ನೇಣಿಗೆ ಶರಣಾದ ದುರ್ದೈವಿ. ನಡಹಳ್ಳಿ ಗ್ರಾಮದ ತನ್ನ ಜಮೀನಿನಲ್ಲಿರುವ ಮನೆಯ ಕೊಟ್ಟಿಗೆಯ ಕಂಬಕ್ಕೆ ಹಗ್ಗದಿಂದ ನೇಣಿಗೆ ಶರಣಾಗಿದ್ದಾಗಿ ಮೂಲಗಳು ತಿಳಿಸಿವೆ.
೪ಎಕರೆ ೧೦ಗುಂಟೆ ಜಮೀನು ಹೊಂದಿದ್ದ ಶಾಂತಗೌಡ ಬ್ಯಾಂಕ್, ಪಿಕೆಪಿಎಸ್, ಕೈಸಾಲ ಅಂತಾ ಅಂದಾಜು ೫ಲಕ್ಷಕ್ಕೂ ಹೆಚ್ಚು ಸಾಲ ಪಡೆದಿದ್ದ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ತಲಾಟೆ ರಿಯಾಜ ನಾಯ್ಕೋಡಿ ಭೇಟಿ ನೀಡಿ ಪರಿಶೀಲಿಸಿದ್ದು, ಸಾಲ ಪಡೆದ ಬಗ್ಗೆ ಖಚಿತಪಡಿಸಿಕೊಂಡಿದ್ದಾರೆ. ಘಟನೆಯ ಮಾಹಿತಿ ತಿಳಿದ ತಾಳಿಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

