ವಿಜಯಪುರ: ಹಾಲುಮತ ಧರ್ಮವು ಅತ್ಯಂತ ಶ್ರೇಷ್ಠವಾಗಿದ್ದು, ಈ ಧರ್ಮದ ಸಾರವನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿಜಯಪುರದ ಹಾಲುಮತ ವಿದ್ವಾಂಸ ಚಂದ್ರಕಾಂತ ಬಿಜ್ಜರಗಿ ಗುರೂಜಿ ಹೇಳಿದರು.
ತಾಳಿಕೋಟಿ ತಾಲೂಕಿನ ಬೂದಿಹಾಳ ಪಿಟಿ ಗ್ರಾಮಕ್ಕೆ ಭೇಟಿ ನೀಡಿದ ಅವರು, ಹಾಲುಮತದ ಪ್ರತಿಯೊಂದು ಮನೆಗೆ ಭೇಟಿ ನೀಡಿದ ಅವರು, ತಾವು ಬರೆದ ಹಾಲುಮತದ ಗ್ರಂಥ ಪ್ರತಿಯೊಬ್ಬರಿಗೂ ತಲುಪಿಸಿ, ಮಧ್ಯ, ಮಾಂಸ, ಸೇವನೆ ಮಾಡಬಾರದು. ಒಳ್ಳೆಯ ಮನುಷ್ಯರಾಗಿ ಧರ್ಮದ ಮೂಲಸಾರದಂತೆ ಬದುಕಬೇಕು ಎಂದು ಹೇಳಿದರು.
ಹಾಲುಮತದ ಜನಾಂಗದವರು ತಮ್ಮ ಮಕ್ಕಳಿಗೆ ಶಿಕ್ಷಣವಂತರಾಗಿ ಮಾಡಲು ಶ್ರಮಿಸಬೇಕು. ಶಿಕ್ಷಣದಿಂದಲೇ ಧರ್ಮದ ಏಳಿಗೆ ಸಾಧ್ಯ ಎಂದು ಹೇಳಿದರು
ಈ ಸಂದರ್ಭದಲ್ಲಿ ಹಾಲುಮತದ ಮುಖಂಡರಾದ ಮಲ್ಲಿಕಾರ್ಜುನ್ ನಾಯ್ಕಲ್, ಗ್ರಾಮ ಪಂಚಾಯತಿ ಸದಸ್ಯರಾದ ಕುಮಾರ್ ಗೌಡ ಬಿರಾದಾರ್, ಮಲ್ಲಿಕಾರ್ಜುನ ಕುಳಗೇರಿ, ಹನುಮಂತರಾಯ ಮಡಿಕೆಶ್ವರ್, ದೇವಕಾಂತ್ ಬಿಜ್ಜರಗಿ, ಸತೀಶ್ ಅಡವಿ ಮುಂತಾದವರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

