10 ಕೋಟಿ ನಶಾಮುಕ್ತ ಮಹಾ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿದ ಶಂಕರರಾವ ದೇಶಮುಖ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಒಬ್ಬ ವ್ಯಕ್ತಿ ನಶೆಯಿಂದ ಮುಕ್ತನಾದರೆ ಒಂದು ಕುಟುಂಬ ಉಳಿಯುತ್ತದೆ. ಒಂದು ಕುಟುಂಬ ಉಳಿದರೆ ಸಮಾಜ ಸದೃಢವಾಗುತ್ತದೆ;
ಸಮಾಜ ಸದೃಢವಾದರೆ ರಾಷ್ಟ್ರ ಸಶಕ್ತವಾಗುತ್ತದೆ ಎಂದು ಶಂಕರರಾವ ದೇಶಮುಖ ಹೇಳಿದರು. ನಗರದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಓಂ ಶಾಂತಿ ಭವನದಲ್ಲಿ ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ, ರಾಜ್ಯ ಸರ್ಕಾರ ಮತ್ತು ಮಾದಕ ದ್ರವ್ಯ ನಿಯಂತ್ರಣ ಮಂಡಳಿ ಹಾಗೂ ಬ್ರಹ್ಮಾಕುಮಾರಿಸ್ ಸಹಯೋಗದಲ್ಲಿ ಹಮ್ಮಿಕೊಂಡ 10 ಕೋಟಿ ನಶಾಮುಕ್ತ ಮಹಾ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಶೆ ಕ್ಷಣಿಕ ಸುಖ ನೀಡಬಹುದು ಆದರೆ ಶಾಶ್ವತ ದುಃಖವನ್ನೇ ಉಡುಗೊರೆಯಾಗಿ ಕೊಡುತ್ತದೆ ಸಂಯಮವೇ ಜೀವನದ ನಿಜವಾದ ಶಕ್ತಿ ಎಂದರು.
ಅತಿಥಿಯಾಗಿ ಮಾತನಾಡಿದ ಇನ್ನರ್ ವಿಲ್ ಕ್ಲಬ್ ಮಾಜಿ ಅಧ್ಯಕ್ಷೆ ನಾಗರತ್ನ ಮನಗೂಳಿ
ಯುವಕರ ಕೈಯಲ್ಲಿ ಮಾದಕ ವಸ್ತು ಬದಲಾಗಿ, ಪುಸ್ತಕ ಇರಲಿ, ಮನದಲ್ಲಿ ವ್ಯಸನದ ಬದಲು ಗುರಿ ಇರಲಿ ಆಗ ಮಾತ್ರ ಭಾರತ ವಿಶ್ವಕ್ಕೆ ಮಾದರಿಯಾಗಲಿದೆ.
ನಶಾಮುಕ್ತ ಭಾರತ ಕೇವಲ ಒಂದು ಅಭಿಯಾನವಲ್ಲ,
ಅದು ಆರೋಗ್ಯ, ಸಂಸ್ಕಾರ ಮತ್ತು ಸುಂದರ ಭವಿಷ್ಯದ ಸಂಕಲ್ಪವಾಗಿದೆ ಎಂದರು.
ಈ ಸಂದರ್ಭದಲ್ಲಿ ನಗರದ ಬ್ರಹ್ಮಕುಮಾರಿಸ್ ಸಂಸ್ಥೆಯ ಸಂಚಾಲಕಿ ಪವಿತ್ರ ಅಕ್ಕನವರು ಪ್ರತಿಜ್ಞೆಯ ಸಾಲುಗಳನ್ನು ಬೋಧಿಸಿದರು.
ಕಾರ್ಯಕ್ರಮದ ಅಭಿಯಾನದಲ್ಲಿ ವಿಶ್ರಾಂತ ಪ್ರಾಚಾರ್ಯ ಬಿ ಜಿ ಪಾಟೀಲ, ಬಿ ಎನ್ ಬಿ ಫೌಂಡೇಶನ್ ಅಧ್ಯಕ್ಷ ಶ್ರೀಶೈಲಗೌಡ ಬಿರಾದಾರ ಮಾತನಾಡಿದರು.
ಈ ಸಂದರ್ಭದಲ್ಲಿ ಎಸ್ ಎಸ್ ಬುಳ್ಳಾ, ಅಂಬರೀಶ ಯತ್ನಾಳ ಕೆ ಎಸ್ ಪತ್ತಾರ, ಎಸ್ ಎಸ್ ಪಾಟೀಲ, ಎಂ ಎಂ ದೊಡ್ಡಮನಿ, ಎಸ್ ವೈ ಬಿರಾದಾರ , ಪ್ರಮೀಳಾ ಪಾಟೀಲ, ಸೀಮಾ ಉಡಚಣ, ಖುಷಿ ಕೆಂಭಾವಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

