ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ದೇಶಿಯ ಕ್ರೀಡೆಗಳನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ಗ್ರಾಮಸ್ಥರು ಪ್ರತಿವರ್ಷ ಕಬಡ್ಡಿ ಪಂದ್ಯಾವಳಿ ಆಯೋಜಿಸುತ್ತಿರುವುದು ಶ್ಲಾಘನೀಯ ಎಂದು ತಹಶೀಲ್ದಾರ ನಿಂಗಣ್ಣ ಬಿರಾದಾರ ಹೇಳಿದರು.
ತಾಲ್ಲೂಕಿನ ಮುಳಸಾವಳಗಿ ಗ್ರಾಮದ ಹಜರತ್ ಮತಾಬಷಹೀದ ಜಾತ್ರಾ ಮಹೋತ್ಸವದ ಅಂಗವಾಗಿ ಇತ್ತೀಚಿಗೆ ಜರುಗಿದ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
ಗ್ರಾಮದ ಸಮುದಾಯಗಳು ಅತ್ಯಂತ ಅನ್ಯೋನ್ಯತೆಯಿಂದ ಸೇರಿ ಮೂರು ದಿನಗಳ ಕಾಲ ಜಾತ್ರೆಯನ್ನು ಮಾಡುತ್ತಿರುವುದು ಸರ್ವರಿಗೂ ಮಾದರಿ ಎಂದರು.
ಸ್ಥಳೀಯ ಪಿಕೆಪಿಎಸ್ ಅಧ್ಯಕ್ಷ ಸಂಗನಗೌಡ ಬಿರಾದಾರ, ಭೂ ನ್ಯಾಯ ಮಂಡಳಿಯ ಸದಸ್ಯ ಸಾಯಬಣ್ಣ ಸೊನ್ನಳ್ಳಿ, ಶರಣಗೌಡ ಪಾಟೀಲ, ಗುರುರಾಜ ಆಕಳವಾಡಿ, ಪ್ರೌಢಶಾಲಾ ಶಿಕ್ಷಕ ಎ.ಎಸ್.ವಾಲೀಕಾರ ಮಾತನಾಡಿದರು.
ಪಾರಿತೋಷಕ ಪ್ರಾಯೋಜಕರಾದ ಬಸನಗೌಡ ಪಾಟೀಲ, ನಿಂಗನಗೌಡ ಪ್ರಭುಗೋಳ, ಮೈಬೂಬ ಮಕಾನದಾರ, ಡಿಸಿಸಿ ಬ್ಯಾಂಕಿನ ಮಾಜಿ ನಿರ್ದೇಶಕ ತಿಪ್ಪಣ್ಣ ಮೂಲಿಮನಿ, ಸುರೇಶ ಗುದ್ದಿ, ಎಸ್.ಬಿ.ಬಿರಾದಾರ, ಶರಣಪ್ಪ ತಳವಾರ, ಡಾ.ಬಿ.ಎಸ್.ನಾಯ್ಕೋಡಿ, ಕಲ್ಲಪ್ಪ ರೋಡಗಿ, ಮಲಕು ಸುರಗಿಹಳ್ಳಿ, ದಾವಲಸಾಬ ಗಂಗೂರ, ರಮೇಶ ಹಿರೇಮಠ, ಬಾಪುಗೌಡ ಪಾಟೀಲ, ನಾನಾಗೌಡ ಬಿರಾದಾರ, ಹಸನ ಇನಾಮದಾರ, ಜಾಕೀರ ಮುಜಾವರ, ಈರಣ್ಣ ನಾಯ್ಕೋಡಿ, ಮನೋಹರ ಪೂಜಾರಿ, ಅರವಿಂದ ನಾಯ್ಕೋಡಿ, ಸೋಮಶೇಖರ ಹದರಿ, ದಶರಥ ನಾಯ್ಕೋಡಿ, ಯಲ್ಲಾಲಿಂಗ ಪೂಜಾರಿ, ರಫೀಕ ಗಂಗೂರ ಇದ್ದರು.

